ಸಿ ಟಿ ರವಿಗೆ ಬಿಡುಗಡೆಗೆ ಆದೇಶ

ಸಿ ಟಿ ರವಿಯವರನ್ನು ತಕ್ಷಣವೆ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ರವಿಯವರು ತನಿಖೆಗೆ ಸಹಕಾರ ನೀಡಬೇಕೆಂದು ಶರತ್ತು ವಿಧಿಸಿದೆ. ತನಿಖಾಧಿಕಾರಿ ವಿಚಾರಣೆಗೆ ಕರೆದಾಗ ಬರಬೇಕೆಂದು ಆದೇಶ ನೀಡಿದೆ. 7 ವರ್ಷಕ್ಕೂ ಕಡಿಮೆ ಅವಧಿಯ ಶಿಕ್ಷಾರ್ಹವಾದ್ದರಿಂದ ನೋಟಿಸ್ ನೀಡಬೇಕಿತ್ತು ಎನ್ನುವ ವಿಚಾರವನ್ನು ಗಮನಿಸಿದೆ. ನಿನ್ನೆ ವಿಧಾನಮಂಡಲದಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದರೆಂದು ಬಿಜೆಪಿ ಎಂ ಎಲ್ ಸಿ ಸಿ ಟಿ ರವಿಯವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿತ್ತು.

Read More

ಕರ್ನಾಟಕ ಮರುಚುನಾವಣೆ – 3 ಕ್ಷೇತ್ರದಲ್ಲಿ ಮತದಾನ ಆರಂಭ

ಮರುಚುನಾವಣೆಯಲ್ಲಿ 9 ಗಂಟೆತನಕ 10 % ಮತದಾನ ಕರ್ನಾಟಕದ 3 ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲು ಬಿರುಸಿನ ಮತದಾನ ನಡೆಯುತ್ತಿದೆ. ವೃದ್ಧರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವುದು ಯುವ ಜನತೆಯನ್ನು ಆಹ್ವಾನ ಮಾಡುತ್ತಿರುವಂತಿದೆ. ಮಾಜಿ ಪ್ರಧಾನಿ , ಮಾಜಿ ಮುಖ್ಯಮಂತ್ರಿ , ಕೇಂದ್ರ ಮಂತ್ರಿ , ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ , ಮಂತ್ರಿಗಳು, ಶಾಸಕರು, ಸಂಸದರು ಚುನಾವಣೆ ಪ್ರಚಾರ ಮಾಡುತ್ತಿದ್ದದ್ದನ್ನು ನೋಡಿದ್ದೇವೆ. ಮತದಾರರು ಯಾರ ಕೆೈ ಹಿಡಿಯುತ್ತಾರೆ 20 ನೇ ತಾರೀಖು ತಿಳಿಯುತ್ತದೆ.

Read More
Cm in adivasi

ಮೊಟ್ಟಮೊದಲ ಬಾರಿಗೆ ಆದಿವಾಸಿಗಳ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ

  ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ: ಸಿ.ಎಂ.ಸಿದ್ದರಾಮಯ್ಯ ಭರವಸೆ* *ಹೆಚ್.ಡಿ.ಕೋಟೆಯ ಕೆರೆಹಾಡಿ ಆದಿವಾಸಿಗಳೊಂದಿಗೆ ಎರಡು ಗಂಟೆ ಕಳೆದು ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿಎಂ* *ನಮ್ಮ ಮನೆ ಬಾಗಿಲಿಗೆ ಬಂದ ಮೊದಲ ಮುಖ್ಯಮಂತ್ರಿ: ಎರಡು ಪೀಳಿಗೆ ಆದಿವಾಸಿಗಳ ಸಂಭ್ರಮ* *ಹಲವು ದಶಕಗಳ ಕರೆಂಟು-ಕುಡಿಯುವ ನೀರಿನ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿಎಂ‌ ಸಿದ್ದರಾಮಯ್ಯ* ಕೆರೆಹಾಡಿ (ಹೆಚ್.ಡಿ.ಕೋಟೆ) ನ 12: ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ…

Read More
siddharamayya

ಮುಖ್ಯಮಂತ್ರಿಗಳ ಮೈಸೂರು ಜಿಲ್ಲಾ ಪ್ರವಾಸ

* ಮುಖ್ಯಮಂತ್ರಿಗಳ ಮೈಸೂರು ಜಿಲ್ಲಾ ಪ್ರವಾಸ* ಮೈಸೂರು,ನ.11 ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನವೆಂಬರ್ 12 ಮತ್ತು 13 ರಂದು ಮೈಸೂರು ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ. *ನವೆಂಬರ್ 12 ರಂದು ಬೆಳಗ್ಗೆ 11.30 ಗಂಟೆಗೆ ಹೆಚ್.ಡಿ ಕೋಟೆಗೆ ಆಗಮಿಸಿ, ಹೆಗ್ಗಡದೇವನಕೋಟೆ ಮತ್ತು ಸರಗೂರು ತಾಲ್ಲೂಕು ನಾಯಕರ ಸಂಘದ ವತಿಯಿಂದ ಹೆಚ್.ಡಿ.ಕೋಟೆಯ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ* ಪಾಲ್ಗೊಳ್ಳಲಿದ್ದು, ಮಧ್ಯಾಹ್ನ 12.30 ಗಂಟೆಗೆ ಹೆಚ್.ಡಿ.ಕೋಟೆ ತಾಲ್ಲೂಕಿನ…

Read More