*ರಪ್ತು ಹೆಚ್ಚಾದರೆ ನಮ್ಮ ದೇಶದ ಜಿ.ಡಿ.ಪಿ ಹೆಚ್ಚಾಗುತ್ತದೆ – ಸಿ.ಎಸ್ ಬಾಬು ನಾಗೇಶ್*
ಮೈಸೂರು,ಡಿ.02:- ಆಮದನ್ನು ಕಡಿಮೆ ಮಾಡಿಕೊಂಡು ರಪ್ತು ಹೆಚ್ಚಾದರೆ ನಮ್ಮ ದೇಶದ ಜಿ.ಡಿ.ಪಿ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕರಾದ ಸಿ.ಎಸ್ ಬಾಬು ನಾಗೇಶ್ ಅವರು ತಿಳಿಸಿದರು.
ಇಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ನಡೆದ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಇದೂವರೆಗೂ ನಡೆದಿರುವಂತಹ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿರುವುದು ಶೇ 100% ನಲ್ಲಿ 30% ಅಷ್ಟೆ ಉಪಯುಕ್ತ ಎಂದು ಕಂಡು ಬರುತ್ತಿದೆ. ಇನ್ನೂ 70% ಯಾವುದೇ ರೀತಿಯ ಸಕಾರಾತ್ಮಕ ಕಂಡುಬರುತಿಲ್ಲ ಎಂದರು.
ಡೊಮೆಸ್ಟಿಕ್ ನಲ್ಲಿ ಎಂಎಸ್ಎoಇ ಘಟಕವನ್ನು ಪ್ರಾರಂಭಿಸಿ, ಇದರಲ್ಲಿ ಯಶಸ್ಸು ಕಂಡರೆ ಖಂಡಿತವಾಗಿಯೂ ಉದ್ಯಮಗಳು ಬೆಳವಣಿಗೆ ಹೊಂದಲು ಇದು ದಾರಿಯಾಗುತ್ತದೆ ಎಂದು ಹೇಳಿದರು.
ರಫ್ತಿನಲ್ಲಿ ಯಾವುದೇ ಕಾರಣಕ್ಕೂ ನಷ್ಟ ಇರುವುದಿಲ್ಲ. ರಪ್ತುನ್ನು ಪ್ರಾರಂಭ ಮಾಡಿದರೆ ಖಂಡಿತವಾಗಿಯೂ ಆದಾಯವನ್ನು ಗಳಿಸಿ ಬೆಳವಣಿಗೆಯನ್ನು ಹೊಂದಲು ಅವಕಾಶವಿರುತ್ತದೆ. ಯಾಕೆಂದರೆ ಹೊರ ದೇಶಗಳಗೆ ರಪ್ತು ಮಾಡಿದರೆ ಆ ದೇಶದ ಒಂದು ಕರೆನ್ಸಿಯಲ್ಲಿ ಆದಾಯ ದೊರೆಯುತ್ತದೆ. ಹಾಗೆಯೇ ತರಬೇತಿಯಲ್ಲಿ ಆಯಾ ಇಲಾಖೆಯ ಸಂಸ್ಥೆಗಳು ಮಾಹಿತಿಯನ್ನು ನೀಡುತ್ತವೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ.ಶಿವಲಿಂಗಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ರಫ್ತು ಉತ್ತೇಜನ ಕಾರ್ಯಕ್ರಮದಲ್ಲಿ ಬಹಳ ಆಸಕ್ತಿ ವಹಿಸಿ ಭಾಗವಹಿಸಿ ಆದಾಯ ಗಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಮ್ಮ ದೇಶದಿಂದ ಹೆಚ್ಚಿನ ಉತ್ಪನ್ನಗಳು ಮಾರಾಟವಾಗುವಲ್ಲಿ ಉತ್ತೇಜನಗೊಳಿಸಬೇಕು ಎಂದು ಹೇಳಿದರು. 6 ದಿನಗಳ ರಪ್ತು ತರಬೇತಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಆಮದು ಮತ್ತು ರಫ್ತಿನ ವಿನಿಮಯದಲ್ಲಿ ದೇಶ ಅಭಿವೃದ್ಧಿಯನ್ನು ಕಾಣಲು ಎಲ್ಲರು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು. ತರಬೇತಿಯಲ್ಲಿ ಯೌವುದೇ ಒತ್ತಡವಿದ್ದರೂ ಅದನ್ನೆಲ್ಲ ಮರೆತು ಕಾರ್ಯಕ್ರಮದಲ್ಲಿ ದೊರಕುವಂತಹ ರಫ್ತು, ವಿದೇಶಿ ಪ್ರಯಾಣದಂತಹ ಹಲವಾರು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಮೈಸೂರಿನ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಜೈನ್ ಅವರು ಮಾತನಾಡಿ, ಆಮದು ಕಡಿಮೆ ಆಗಬೇಕು ರಪ್ತು ಹೆಚ್ಚಾಗಬೇಕು ಆಗ ಮಾತ್ರ ನಮ್ಮ ದೇಶದ ಜಿ.ಡಿ.ಪಿ ಹೆಚ್ಚಾಗುತ್ತದೆ. ಎಂಎಸ್ಎoಇಯಲ್ಲಿ ರಫ್ತಿಗೆ ಸಂಬoಧಿಸಿದoತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹಳ ಉತ್ತೇಜನವನ್ನ ನೀಡುತ್ತಿದೆ ಎಂದರು.
ಮೈಸೂರಿನಲ್ಲಿ 165 ಕ್ಕೂ ಹೆಚ್ಚು ರಫ್ತು ಆದಾಯದ ಕೈಗಾರಿಕೆಗಳಿವೆ ಇದನ್ನು ಹೊರತುಪಡಿಸಿ ಪರೋಕ್ಷ ಮದ್ರಾಸ್, ಬಾಂಬೆಯಿoದ ರಫ್ತು ಮಾಡುವ ಉದ್ಯಮಗಳು ಸಾಕಷ್ಟು ಪ್ರಮಾಣದಲ್ಲಿ ಇದೆ. ರಫ್ತಿನಲ್ಲಿ ಅಗರಬತ್ತಿ, ಹ್ಯಾಂಡಿ-ಕ್ರಾಫ್ಟ್ಸ್, ಮೈಸೂರು ಸ್ಯಾಂಡೆಲ್, ಮೈಸೂರು ಸಿಲ್ಕ್ ಉತ್ಪನ್ನಗಳು ಅತ್ಯಂತ ಹೆಚ್ಚು ಪ್ರಭಾವಶಾಲಿಯಾಗಿವೆ .ಇವು ಪ್ರಪಂಚದ ರಫ್ತು ಉದ್ಯಮವರ್ಗಗಳನ್ನು ಆಕರ್ಷಿಸಿದೆ ಎಂದು ತಿಳಿಸಿದರು.
ಎಂಎಸ್ಎoಇ, ಮೈಸೂರು ಕೈಗಾರಿಕೆಗಳ ಸಂಘಗಳನ್ನು ನಾನು ಪ್ರತಿನಿಧಿಸುತ್ತೇನೆ ಎಂಎಸ್ಎoಇ ಉದ್ಯಮಗಳ ಕುರಿತು ಯಾವುದೇ ಮಾಹಿತಿ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೆ.ಬಿ. ಲಿಂಗರಾಜು ಅವರು ಮಾತನಾಡಿ, ಉತ್ಪಾದನೆ ಮಾಡುವುದು ಮಾತ್ರವಲ್ಲ ರಫ್ತು ಮಾಡಲು ಚಾಣಾಕ್ಷ ತನ ಬೇಕು. ನಾವು ತಯಾರು ಮಾಡುವಂತಹ ರಾಪ್ತುಗಳ ಗುಣಮಟ್ಟ, ಪಾವಿತ್ರತೆ, ತೂಕ, ಅಳತೆ ಮತ್ತು ಪ್ಯಾಕೇಜಿಂಗ್ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗ ಮಾತ್ರ ನಮ್ಮ ಉತ್ಪನ್ನಗಳು ಜನರನ್ನು ತಲುಪಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಮತ್ತು ವಿಟಿಪಿಸಿ- ರಫ್ತು ಸೌಲಭ್ಯ ಕೇಂದ್ರ, ಜಿಲ್ಲಾ ಪಂಚಾಯತ್ನ ಉಪನಿರ್ದೇಶಕರಾದ ಮೇಘಲಾ ಎಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.