ಗೀತೆ – 94 : ಸಾಧಕನು ಯಾವ ಮೆಟ್ಟಿಲುಗಳನ್ನು ಸಾಧಿಸಬೇಕು?

Gitacharya
Spread the love

ಗೀತೆ : 94

20. ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ।
ಕರ್ಮಣ್ಯಭಿ-ಪ್ರವೃತ್ತೋಽಪಿ ನೈವ ಕಿಂಚಿತ್ ಕರೋತಿ ಸಃ॥

ಕರ್ಮಫಲಾಸಂಗಂ = ಕರ್ಮಫಲದಲ್ಲಿ ಆಸಕ್ತಿಯನ್ನು, ತ್ಯಕ್ತ್ವಾ = ಬಿಟ್ಟು, ನಿತ್ಯತೃಪ್ತಃ = ಯಾವಾಗಲೂ ತೃಪ್ತಿಯಾಗಿಯೇ ಇರುತ್ತಾ, ನಿರಾಶ್ರಯಃ = ಯಾವ ವ್ಯಕ್ತಿಯನ್ನಾಗಲಿ, ಯಾವ ಪದಾರ್ಥವನ್ನಾಗಲಿ, ಆಶ್ರಯಿಸದೇ ಇರುವ, ಸಃ = ಆ ಜೀವನ್ಮುಕ್ತನು, ಕರ್ಮಣಿ = ಕರ್ಮದಲ್ಲಿ, ಅಭಿಪ್ರವೃತ್ತಃ-ಅಪಿ = ಅತ್ಯಂತ, ಆಳವಾಗಿ ಪ್ರವರ್ತಿಸುವವನು ಆಗಿದ್ದರೂ, ಕಿಂಚಿತ್‌ = ಸ್ವಲ್ಪವೂ ಕೂಡ, ನ-ಕರೋತಿ-ಏವ = ಮಾಡುತ್ತಲೇ ಇಲ್ಲ. ಅರ್ಜುನನೆ! ಸಾಧಕನು ಮೂರು ಮೆಟ್ಟಿಲನ್ನು ಸಾಧಿಸಬೇಕು.

  1. ಆತನು ಕರ್ಮಫಲಗಳ ಮೇಲೆ ಆಸಕ್ತಿಯನ್ನು ಬಿಟ್ಟುಬಿಡಬೇಕು.
  2. ಎಲ್ಲಾ ಕಾಲದಲ್ಲಿಯೂ ತನ್ನೊಂದಿಗೆ ತಾನೇ, ತನ್ನೊಳಗೆ ತಾನೇ, ತೃಪ್ತಿಯಾಗಿ ಇರಬೇಕು..
  3. ಮಾನಸಿಕವಾಗಿ ಯಾವ ದೃಶ್ಯಪದಾರ್ಥದ ಮೇಲಾಗಲಿ, ಯಾವ ವ್ಯಕ್ತಿಯ ಮೇಲಾಗಲಿ, ಆಧಾರಪಟ್ಟುಕೊಂಡು ಇರಬಾರದು.

ಈ ಮೂರು ಮೆಟ್ಟಿಲನ್ನೂ ಸಾಧಿಸಿದವನು ಪರಿಪೂರ್ಣ ಬ್ರಹ್ಮಜ್ಞಾನಿಯೇ ಆಗುವನು. ಅಂತಹವನು ಎಷ್ಟು ವಿಧವಾದ ಕರ್ಮಗಳನ್ನು ಎಷ್ಟು ಆಳವಾಗಿ ಮಾಡಿದರೂ ಸರಿಯೇ, ಸ್ವಲ್ಪ ಕೂಡ ಮಾಡದಂತೆಯೇ! ಆತನ ಕರ್ಮಗಳೆಲ್ಲವೂ ಅಕರ್ಮಗಳೇ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ