ಗೀತೆ – 112 : ಅಗ್ನಿಯಲ್ಲಿ ದೊಡ್ಡ ಕಟ್ಟಿಗೆಯೂ ಭಸ್ಮೀಪಟಲವಾಗುತ್ತದೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 112

37. ಯಥೈಧಾಂಸಿ ಸಮಿದ್ಧೋಽಗ್ನಿಃ ಭಸ್ಮಸಾತ್ ಕುರುತೇಽರ್ಜುನ।
ಜ್ಞಾನಾಗ್ನಿ ಸ್ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ॥
ಅರ್ಜುನ = ಎಲೈ ಅರ್ಜುನನೆ!, ಸಮಿದ್ಧಃ = ಚೆನ್ನಾಗಿ ಹತ್ತಿಕೊಳ್ಳುವಂತೆ ಮಾಡಲ್ಪಟ್ಟ, ಅಗ್ನಿಃ = ಬೆಂಕಿಯು, ಏಧಾಂಸಿ = ಕಟ್ಟಿಗೆಗಳನ್ನು, ಯಥಾ = ಹೇಗೆ, ಭಸ್ಮಸಾತ್‌ = ಬೂದಿಯಾಗಿ, ಕುರುತೇ = ಮಾಡಿಬಿಡುವುದೋ, ತಥಾ = ಹಾಗೆಯೇ, ಜ್ಞಾನಾಗ್ನಿಃ = ಪರಮಾತ್ಮ ಜ್ಞಾನವೆಂಬ ಅಗ್ನಿಯು, ಸರ್ವಕರ್ಮಾಣಿ = ಪಾಪಪುಣ್ಯರೂಪವಾದ ಸಮಸ್ತ ಕರ್ಮಗಳನ್ನೂ, ಭಸ್ಮಸಾತ್‌ = ಬೂದಿಯಾಗಿ, ಕುರುತೇ = ಮಾಡಿಬಿಡುತ್ತದೆ.

ಅರ್ಜುನನೆ! ಅಗ್ನಿಯನ್ನು ಚೆನ್ನಾಗಿ ಹತ್ತಿಸಿದರೆ ಅದರಲ್ಲಿ ಎಷ್ಟು ದೊಡ್ಡ ಕಟ್ಟಿಗೆಗಳ ರಾಶಿಯನ್ನು ಹಾಕಿದರೂ, ಆ ರಾಶಿಯನ್ನು ಅಗ್ನಿಯು ಬುೂದಿಮಾಡಿಬಿಡುತ್ತದೆ. ಹಾಗೆಯೇ ಪರಮಾತ್ಮಜ್ಞಾನವೆಂಬ ಅಗ್ನಿಯನ್ನು ಜಾಗ್ರತೆಯಾಗಿ ಅಭ್ಯಾಸಮಾಡಿ ಪ್ರಜ್ವಲಿಸುವ ಹಾಗೆ ಮಾಡಿದರೆ, ಅದು ನಿನ್ನ ಜನ್ಮಜನ್ಮಾಂತರಗಳಲ್ಲಿ ಮಾಡಿದ ಪಾಪಪುಣ್ಯಗಳೆಲ್ಲವನ್ನೂ ಕೂಡ ಭಸ್ಮೀಪಟಲ ಮಾಡಿಬಿಡುತ್ತದೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ