ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆ
ಅಂಗವಿಕಲರನ್ನು ಸಾಮಾನ್ಯರಂತೆ ಕಾಣಬೇಕು ಅಲೋಕ್ ಆರ್ ಜೈನ್
ಕ್ಷೇಮ ವಿಶೇಷ ಶಾಲೆಯಲ್ಲಿ ವಿಶ್ವವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು. ವಿಶೇಷವಾಗಿ ಪ್ರಾರ್ಥನೆಯನ್ನು ನೃತ್ಯದ ಮೂಲಕ ಚಾರು ಎಂಬ ವಿದ್ಯಾರ್ಥಿಯು ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಅಲೋಕ್ ಆರ್ ಜೈನ್
ರವರು, ಮುಖ್ಯ ಅತಿಥಿಗಳಾಗಿ ವಿದ್ಯವಿಕಾಸ್ ಕಾಲೇಜಿನ ಜೈ ಸಂತೋಷ್ ನಾಯಕ್ ಉಪನ್ಯಾಸಕರು, ಸಮಾಜ ಸೇವಕರಾದ ಗಗನ್ ದೀಪ್ ಮತ್ತು ಮಹಾನ್ ಶ್ರೇಯಾಸ್ ಹಾಗೂ ನೀಲಾಮಣಿ ಎಂ ಕ್ಷೇಮ ವಿಶೇಷ ಶಾಲೆಯ ಸಂಸ್ಥಾಪಕರು ಕಾರ್ಯಕ್ರಮದಲ್ಲಿ ಹಾಜರಿದ್ದು ಉದ್ಘಾಟನೆಯನ್ನು ನೇರವೇರಿಸಿದರು.
ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆಯನ್ನು ವಿಜೇತರಾದ 60 ವಿದ್ಯಾರ್ಥಿಗಳಿಗೆ ಇಂದು ಬಹುಮಾನ ವಿತರಣೆ ಯನ್ನು ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅತಿಥಿಗಳು ವಿತರಿಸಿದರು ಹಾಗೂ ಪುಟಾಣಿಗಳಿಂದ ವೇಷಭೂಷಣ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಾನಸಗಂಗೋತ್ರಿ ಮೈಸೂರು ಕಾಲೇಜಿನ ಎಂ ಎಸ್ ಸಿ ವಿದ್ಯಾರ್ಥಿಗಳು ವಿದ್ಯಾ ವಿಕಾಸ್ ಕಾಲೇಜು ಮೈಸೂರು ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮವನ್ನು ನಡೆಸಲಾಯಿತು.
ಅಲೋಕ್ ಆರ್ ಜೈನ್ ರವರು ಮಕ್ಕಳಿಂದ ಉತ್ಸಾಹಕರಾಗಿ ನೃತ್ಯವನ್ನು ಮಾಡಿದರು ಕಾರ್ಯಕ್ರಮದಲ್ಲಿ ಕ್ಷೇಮ ವಿಶೇಷ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಹಾಜರಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್ ಜೈನ್
“ಅಂಗವಿಕಲರನ್ನು ಸಾಮಾನ್ಯರಂತೆ ಕಾಣಬೇಕು. ಅವರ ಬಗ್ಗೆ ಅನುಕಂಪ ತೋರುವ ಅಗತ್ಯವಿಲ್ಲ. ಅವಕಾಶ ಮಾಡಿಕೊಡಬೇಕು’
ಎಂದು ಹೇಳಿದರು.